ಶಿವಮೊಗ್ಗ:
ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದ ಘಟನೆ ಶಿವಮೊಗ್ಗವನ್ನು ಏಕಾಏಕಿ ಪ್ರಕ್ಷುಬ್ದಗೊಳಿಸಿದೆ.ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಗಣಪತಿ ವಿಗ್ರಹಕ್ಕೆ ಕಾಲಿನಿಂದ ಒದ್ದು, ನಾಗ ಕಲ್ಲುಗಳನ್ನು ಚರಂಡಿಗೆ ಎಸೆದು ಧಾರ್ಮಿಕ ಭಾವನೆಗೆ ತೀವ್ರ ಘಾಸಿಗೊಳಿಸಿದ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರ ದ ಸೈಯದ್ ಅಹಮದ್( 32) ಹಾಗೂ ಬಾಪೂಜಿನಗರದ ರಹಮತ್ (50) ಎಂಬಿಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
