CRIME NEWS
ನಾಲಿಗೆ ಹರಿಬಿಟ್ಟ ರಿಯಾಜ್ ಕಡಂಬು ವಿರುದ್ಧ ಉಡುಪಿಯಲ್ಲಿ ಕೇಸ್
ಬುದ್ಧಿವಂತಿಕೆಯಿಂದ ಹೇಳಿಕೆ ನೀಡುವ ರಿಯಾಜ್ ಕಡಂಬು ಈ ಬಾರಿ ನಾಲಿಗೆ ಹರಿಬಿಟ್ಟು ಹೋಲಿಸರಿಗೆ ತಗಲು ಹಾಕಿಕೊಂಡಿದ್ದಾರೆ
ಉಡುಪಿ: ಬಹುತೇಕ ಹೇಳಿಕೆಗಳನ್ನು ನೀಡುವಾಗ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಹಾಗೂ ಎದುರಾಳಿಗಳನ್ನು ಕಾನೂನಿನ ಕುಣಿಕೆಯಲ್ಲಿ ಕೆಡಹುವ ಕುಟಿಲ ತಂತ್ರದ ಚಾಣಾಕ್ಷ ರಾಜಕಾರಣಿ SFPI ಮುಖಂಡ ರಿಯಾಜ್ ಕಡಬು ಈ ಬಾರಿ ನಾಲಿಗೆ ಹರಿಬಿಟ್ಟು ಪೊಲೀಸರ ಕಾನೂನಿನ ವ್ಯಾಪ್ತಿಯ ಒಳಗೆ ಸಿಲುಕಿದ್ದಾರೆ.
ಕುಂಜಾಲು ದನದ ತಲೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ರಿಯಾಝ್ ಕಡಂಬು ಜು.5ರಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕುಂಜಾಲಿನಲ್ಲಿ ದನದ ತಲೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಸಮಾಜದ ಸ್ವಾಸ್ಥ ಕೆಡಿಸುವಂತಹ, ಗಲಭೆ ಸೃಷ್ಟಿಸುವಂತಹ ಹುನ್ನಾರವನ್ನು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇವರು ಆಧಾರರಹಿತವಾಗಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಯನ್ನು ಭಂಗ ತರುವಂತೆ ಮಾತನಾಡಿರುವ ಕಾರಣ ಪ್ರಕರಣ ದಾಖಲಾಗಿದೆ.
ರಿಯಾಜ್ ಕಡಂಬು ಸುಳ್ಳು ಮಾಹಿತಿ ನೀಡಿ ಗಲಭೆ-ಗೊಂದಲ ಉಂಟು ಮಾಡುವಂತಿದೆ. ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ
– ಉಡುಪಿ ಜಿಲ್ಲಾ ಪೊಲೀಸ್