ಬೆಂಗಳೂರು /ಪುತ್ತೂರು:
ವೆಬ್ ನ್ಯೂಸ್ DTv ಸುಳ್ಳು ಸುದ್ದಿ ಪ್ರಸಾರದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಫೇಕ್ ನ್ಯೂಸ್ ಮತ್ತು ದ್ವೇಷ ಭಾಷಣಗಳ ವಿರುದ್ಧ ಸಾರಿರುವ ಕಾನೂನು ಕ್ರಮಕ್ಕೆ ನೈತಿಕ ಬಲ ಲಭಿಸಿದೆ.
ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ D TV ಕನ್ನಡ ಎಂಬ ವೆಬ್ ನ್ಯೂಸ್ ಪೋರ್ಟಲ್ ವಿರುದ್ದ ಜೂನ್ 21 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ರದ್ದುಗೊಳಿಸುವಂತೆ ಪುತ್ತೂರು ನಿವಾಸಿ ಅಜರುದ್ದೀನ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ನ್ಯಾಯವಾದಿಗಳಾದ ಆಸ್ಮಾ ವಾದ ಮಂಡಿಸಿದ್ದರು. ಪ್ರಕರಣದ ರದ್ದತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅರ್ಜಿದಾರ ಹಿಂಪಡೆದಿದ್ದಾರೆ.
ಪ್ರಕರಣದ ತನಿಖೆಯು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲಿದೆ.
