CRIME NEWS

ಪೊಲೀಸ್ ಪ್ರಕಟಣೆ ಕಳ್ಳರು ಬರುತ್ತಿದ್ದಾರೆ ಎಚ್ಚರ….!

Share

 

ಮಂಗಳೂರು – ಮಂಗಳೂರು ನಗರದಲ್ಲಿ ಕಳ್ಳರಹಾವಳಿ ಜಾಸ್ತಿಯಾಗಿರು ಹಿನ್ನಲೆ ಪೊಲೀಸ್ ಇಲಾಖೆ ಜನರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ.

ಸಲಹೆಗಳು
 ಕಳ್ಳರ ಹಾಗೂ ದರೋಡೆಕಾರರ ಹಾವಳಿ ಹೆಚ್ಚಾಗಿರುದರಿಂದ ಕೈಗೊಳ್ಳಬೇಕಾದ ಕೆಲವುಸುರಕ್ಷಾ ಸಲಹೆಗಳು
1. ಮನೆಯ ಎದುರು ಬಾಗಿಲಿಗೆ ಸೆಂಟರ್ ಲಾಕ್ ಹಾಕಿ ಭದ್ರ ಪಡಿಸಿಕೊಳ್ಳುವುದು.
2. ಮನೆಯ ಮುಂಭಾಗ ಹಾಗೂ ಹಿಂಬದಿ ಬಾಗಿಲಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಯನ್ನು ಅಳವಡಿಸುವುದು.
3.ಮನೆಯಿಂದ ಕಾರ್ಯಕ್ರಮ, ಜಾತ್ರೆ,ಗಳಿಗೆ ಹೋಗುವಾಗ ಮನೆಯಲ್ಲಿ ಕನಿಷ್ಟ ಪಕ್ಷ ಒಬ್ಬರಾದರೂ ಮನೆಯಲ್ಲಿ ಉಳಿದುಕೊಳ್ಳುವುದು.
4.ಗುಜರಿ ಹೆಕ್ಕುವವರು,ಹಾಸಿಗೆ ಮಾರಾಟ, ಬೆಡ್ ಸಿಟ್ ಮಾರಾಟ,ಸ್ಟವ್ ರಿಪೇರಿ ಬಂದಲ್ಲಿ ಅವರ ಆದಾರ್ ಕಾರ್ಡ್ ನ ಪೋಟೋ ಹಾಗೂ ಅವರ ಪೋಟೊ ಮೊಬೈಲ್ ನಲ್ಲಿ ತೆಗೆದಿಡುವುದು.
5. ಗ್ಯಾಸ್ ಸಿಲಿಂಡರ್ ಬದಲಿಸುವ ಸಮಯ ಗ್ಯಾಸ್ ಸಿಲಿಂಡರ್ ಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಹೋಗಬಾರದು.
6. ಹಗಲು/ರಾತ್ರಿ ಹೊತ್ತಿನಲ್ಲಿ ಸಂಶಯಾಸ್ಪದವಾಗಿ ಯಾವುದೇ ವಾಹನ ರಸ್ರೆಯಲ್ಲಿ ನಿಂತಿದ್ದರೆ ನೋಂದಣಿ ನಂಬ್ರ ಬರುವಂತೆ ಪೊಟೋ ತೆಗೆದಿಟ್ಟುಕೊಳ್ಳುವುದು.
7. ರಸ್ತೆಗೆ ಕಾಣುವಂತೆ ಬಾಗಿಲಿಗೆ, ಗೇಟಿಗೆ ಬೀಗ ಹಾಕಬಾರದು.*
8. ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದು.
9. ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡುವುದು.*
11. ಮನೆಯ ಬಾಗಿಲು ತಟ್ಟಿದಾಗ ,ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ  ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸುವುದು.
*12. ಅಪರಿಚಿತರು ಮನೆ ಬಳಿ ಬಂದು  ನೀರು ವಿಳಾಸ ಇತ್ಯಾದಿ  ಕೇಳಲು  ಬಂದಾಗ ಅವರಲ್ಲಿ  ಜಾಗೃತೆಯಿಂದ  ವ್ಯವಹರಿಸುವುದು.*
*13.ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.*
*14. ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೊವೃದ್ದರನ್ನು  ಬಿಟ್ಟು  ಹೋಗುವುದನ್ನು  ತಪ್ಪಿಸಿ.*
*15.ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.*
*16.ಕಿಟಕಿಯ ಪಕ್ಕ  ಬೆಲೆ ಬಾಳುವ ವಸ್ತುಗಳು ಮೊಬೈಲ್ ಫೋನ್ ಇಡುವುದು ತಪ್ಪಿಸಿ.*
*17. ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್  ಲಾಕರ್ ಗಳಲ್ಲಿ ಇಡುವುದು ಉತ್ತಮ.*
*18. ಮನೆ ಬಾಗಿಲುಗಳಿಗೆ  ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಾಗ್ರಿಗಳ ಬಗ್ಗೆ ಒತ್ತು ಕೊಡಿ.*
*19. ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ  ಬಾಗಿಲು , ಕಿಟಕಿ   ಬೀಗ ಹಾಕಿ ಭದ್ರಪಡಿಸಿರುವುದನ್ನು  ಪುನ; ಖಚಿತ ಪಡಿಸಿಕೊಳ್ಳುವುದು.*
*20. ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ  ಮಾಹಿತಿ  ನೀಡುವುದು.*
*21. ಹೊಸದಾಗಿ ಬಾಡಿಗೆ  ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು  ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ.*
*22. ಅನುಮಾನಾಸ್ಪದ ವ್ಯಕ್ತಿ  ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ  ಮಾಹಿತಿ ನೀಡಿ.*
*23.ಚಿನ್ನದ ಒಡವೆಗಳನ್ನು ಪಾಲೀಶ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ  ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.*
.
*24. ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.*
*25. ಒಂಟಿಯಾಗಿ ಓಡಾಡುವಾಗ  ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ  ಮಾಡಿದಾಗ ಎಚ್ಚರದಿಂದ  ವ್ಯವಹರಿಸುವುದು.*
26.ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ ಬಳಿ ಅಪರಿಚಿತರು *ನಿಮ್ಮ  ಹಣ ಕೆಳಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಭದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.*
*27.ಮೋಹಕ್ಕೆ ಬಲಿಯಾಗಿ ಸುಲಿಗೆಗೆ  ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ  ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ  ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.*
*28. ಜನನಿಬಿಡ ಪ್ರದೇಶದಲ್ಲಿ ಪಾರ್ಕ್ , ಕತ್ತಲೆಯಲ್ಲಿ ಕುಳಿತುಕೊಳ್ಳುವ  ಹವ್ಯಾಸ ತಪ್ಪಿಸಿ.*
*29. ಅಪರಿಚಿತರು  ನಂಬಿಸುವ  ಅತೀಂದ್ರ ಶಕ್ತಿಗಳು , ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು  ಅವರ  ನಿಯಂತ್ರಣಕ್ಕೆ  ಒಳಗಾಗಿ ಮೋಸ ಹೋಗಬೇಡಿ.*
*30. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.*
*31. ವಾಯು ವಿಹಾರಕ್ಕೆ  ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು  ಬಟ್ಟೆಯಿಂದ  ಮರೆಮಾಡಿಕೊಳ್ಳಿ.*
*32. ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು  ಆಕರ್ಶಿಸಬೇಡಿ.*
33. ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
34. ಅಗತ್ಯ ಸಮಯದಲ್ಲಿ  112 ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಯನ್ನು ತಿಳಿಸಿ🙏🙏*
*ದನ್ಯವಾದಗಳು*
Click to comment

Leave a Reply

Your email address will not be published. Required fields are marked *

To Top