ಮಂಗಳೂರು: ವಲಯ ನಿಯಮಾವಳಿ ಪರಿಷ್ಕರಣಕ್ಕೆ ದ.ಕ,ಉಡುಪಿನಗರಾಭಿವೃದ್ಧಿಮತ್ತು ನಗರ ಯೋಜನಾ ಪ್ರಾಧಿಕಾರ ಒಕ್ಕೂಟದ ವತಿಯಿಂದ ರಾಜ್ಯದ ಮುಖ್ಯ ಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ತೆರಳಿ ಆಗ್ರಹಿಸಲಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಜಿಲ್ಲೆಗಳಿಗೆ ಏಕರೂಪದ ಪ್ರತ್ಯೇಕ ವಲಯ ನಿಯಮಾವಳಿ (ಕೋಸ್ಟಲ್ ರೋನ್ ರೆಗ್ಯುಲೇಶನ್ಸ್) ರಚಿಸುವ ಬಗ್ಗೆ ಮತ್ತು ಇತ್ತೀಚೆಗೆ ಗ್ರಾಮಪಂಚಾಯತ್ ವ್ಯಾಪ್ತಿಗಳಲ್ಲಿ ಜ್ಯಾರಿಗೊಳಿಸಲಾದ ಸರಕಾರದ ಆದೇಶ ಸಂಖ್ಯೆ (UDD16TTP2023 ಸರಳೀಕ ರಣಗೊಳಿಸುವ) ಬಗ್ಗೆ ಕೋರಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟದ ವತಿಯಿಂದ ಸೋಮವಾರ ಆಯೋಜಿಸಲಾದ ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮತ್ತು ಮಂಗಳೂರುನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಜ್ಯಾರಿಗೊಳಿಸಲಾದ ವಲಯ ನಿಯಮಾವಳಿ ಮತ್ತು ಭೂಪರಿವರ್ತನೆ, ಏಕನಿವೇಶನ ವಿನ್ಯಾಸ ಅನುಮೋದನೆ, ಕಟ್ಟಡ ರಚನಾ ಪರವಾನಿಗೆ, ಲೇಔಟ್ಗಳ ಬಹುನಿವೇಶನ ಅನುಮೋದನೆ ಮೊದಲಾದ ಕಾನೂನುಗಳಲ್ಲಿ ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಭೌಗೋಳಿಕವಾದ ಭೂ ಉಪಯೋಗಕ್ಕೆ ಸರಿಹೊಂದುವುದಿಲ್ಲ. ಆದುದರಿಂದ ಈ ನಿಯಮಾವಳಿಗಳಲ್ಲಿ ಸರಳೀಕರಣಗೊಳಿಸಿ ಕಾನೂನಿನ ಚೌಕಟ್ಟಿನೊಳಗೆ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ವಲಯ ನಿಯಮಾವಳಿಗಳನ್ನು ಪರಿಷ್ಕರಣ ಗೊಳಿಸಬೇಕೆಂದು ಬೇಡಿಕೆಯಾಗಿರುತ್ತದೆ.
ಕೆಲವು ಬದಲಾವಣೆಗಳೊಂದಿಗೆ ಪ್ರತ್ಯೇಕ ವಲಯ ನಿಯಮಾವಳಿಗಳನ್ನು ರೂಪಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ರವರಿಗೆ ಮತ್ತು ಸ್ಪೀಕರ್ ಯು.ಟಿ.ಖಾದರ್ ಮತ್ತು ಜಿಲ್ಲೆಯ ಎಲ್ಲಾ ವಿಧಾನ ಪರಿಷತ್, ವಿಧಾನ ಸಭಾ ಸದಸ್ಯರಿಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಕಾರಾ ತ್ಮಕವಾಗಿ ಸ್ಪಂದಿಸಿ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಸಚಿವರ ಸಭೆ ಕರೆಯುವಂತೆ ಸೂಚನೆ ನೀಡಿರುತ್ತಾರೆ.
ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳು:-
ಕರಾವಳಿ ಜಿಲ್ಲೆಗಳಲ್ಲಿ ತುಂಡು ಭೂಮಿಗಳು ಹೆಚ್ಚಾಗಿದ್ದು, ಭೂನ್ಯಾಯಮಂಡಳಿ ಅಕ್ರಮ ಸಕ್ರಮ 94ಸಿಸಿ. ಯೋಜನೆಯಡಿಯಲ್ಲಿ ಮಂಜೂರಾದ ಭೂಮಿಗಳಿಗೆ ಗಡಿಗುರುತಿನ ಸಮಸ್ಯೆಗಳು ಮತ್ತು ನಿಯಮಾವಳಿ ಯಲ್ಲಿ ತಿಳಿಸಲಾದ ರಸ್ತೆ ಅಗಲೀಕರಣ ಸೆಟ್ ಬ್ಯಾಕ್ಗಳು,ಅರಣ್ಯ ಪ್ರದೇಶಗಳು ಹೆಚ್ಚಾಗಿರುವ ಈ ಜಿಲ್ಲೆ ಗಳಲ್ಲಿ ಅರಣ್ಯ ಮತ್ತು ಇತರ ಭೂಮಿಗಳ ಗಡಿ ಗುರುತು ಮಾಡುವುದು ಕಷ್ಟ ಸಾಧ್ಯವಾಗಿರುವುದರಿಂದ ಬಡವರಿಗೆ ಮನೆ ನಿರ್ಮಾಣ, ಕನ್ವರ್ಷನ್, ಏಕನಿವೇಶನ ವಿನ್ಯಾಸ ಅನುಮೋದನೆ ಈಗಿನ ಕಾನೂನಿನಂತೆ ಕಷ್ಟ ಸಾಧ್ಯವಾ ಗಿರುತ್ತದೆ.ಈ ಹಿಂದೆ ಕನ್ವರ್ಷನ್ ಮಾಡಿ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆದು ಮನೆ, ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಕಾಲ ಮಿತಿ ಇಲ್ಲದೆ ಈಗಿನ ಕಾನೂನು ಅನ್ವಯಿಸಿದ್ದಲ್ಲಿ, ನಿರ್ಮಾಣ ಕುಂಠಿತಗೊಂಡು ಅನಧಿಕೃತ ಕಟ್ಟಡಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಲಿ ಬೆಳವಣಿ ಗೆಗಳನ್ನು ಗಮನದಲ್ಲಿರಿಸಿ, 18ಮೀಟರ್, 12ಮೀಟರ್, 9ಮೀಟರ್ ರಸ್ತೆ ಅಗಲದಲ್ಲಿ ವಿನಾಯಿತಿ ನೀಡಿ ಲಭ್ಯತೆ ಹೊಂದಿದ್ದಲ್ಲಿ ಇದನ್ನು ಅಳವಡಿಸಬಹುದಾಗಿದೆ.
ಗುಡ್ಡ ಪ್ರದೇಶ ಎಂದು ವ್ಯಾಖ್ಯಾನಿಸಿರುವ ಪದಗಳಲ್ಲಿ ಸಮುದ್ರ ಮಟ್ಟದಿಂದ 600ಮೀಟರ್ ಎತ್ತರದಲ್ಲಿ ಇರಬೇಕೆಂಬ ನಿಯಮವಿದ್ದು, ಸಮುದ್ರವನ್ನು ಹೊಂದಿರುವ ನಮ್ಮ ಜಿಲ್ಲೆಗಳಿಗೆ ಸೂಕ್ತವಾಗಿರುವುದಿಲ್ಲ. ಈ ಜಿಲ್ಲೆಗಳಲ್ಲಿ ನದಿ, ಸಮುದ್ರ ಕಾದಿರಿಸಿದ ಅರಣ್ಯ, ಸಾಮಾಜಿಕ ಅರಣ್ಯ, ಬಫರ್ಗಳನ್ನು ಹೊಂದಿದ್ದು, ನಿಯಮಗಳಲ್ಲಿ ಸರಳೀಕರಣಗೊಳಿಸಬೇಕಾಗಿರುತ್ತದೆ. ಅಲ್ಲದೆ ಭೂಅಭಿವೃದ್ಧಿ ಉಪಯೋಗಕ್ಕೆ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಹಸಿರು ವಲಯಗಳ ಪ್ರಮಾಣವನ್ನು ಕಡಿಮೆಗೊಳಿಸಿ, ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಡಬೇಕಾಗಿರುತ್ತದೆ.
ಯೋಜನಾ ಪ್ರದೇಶ ಘೋಷಣೆಗೆ ಮುಂಚಿತವಾಗಿ ಕನ್ವರ್ಷನ್ ಮಾಡಿಕೊಂಡು ಮನೆ ನಿರ್ಮಾಣ, ಸೈಟ್ ಮಾರಾಟ ಮಾಡಿದವರಿಗೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ, ಒಂದು ಬಾರಿ ದಂಡನೆ ಹಾಕಿ ಸರಿ ಪಡಿಸಿಕೊಳ್ಳುವ ಅವಕಾಶವನ್ನು ಒಂದು ಬಾರಿಯಾದರೂ ನೀಡಬೇಕು. ಇತ್ತೀಚೆಗೆ ಪ್ರಾಧಿಕಾರ ವ್ಯಾಪ್ತಿಗೆ ಒಳಪಡದ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಜ್ಯಾರಿಗೊಳಿಸಲಾದ ಕನ್ವರ್ಷನ್, 9/11 ನಿವೇಶನ ವಿನ್ಯಾಸ, ಕಟ್ಟಡ ನಿರ್ಮಾಣ ಅನುಮೋದನೆಗೆ ವಿಧಿಸಿರುವ ನಿಯಮಗಳಲ್ಲಿ ಸರಳೀಕರಣಗೊಳಿಸಬೇಕು.
ಇಂತಹ ಪ್ರಮುಖ ಸಮಸ್ಯೆಗಳನ್ನು ಹೊಂದಿರುವ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕವಾದ ವಲಯ ನಿಯಾಮ ಳಿಗಳನ್ನು ರೂಪಿಸುವಂತೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮೂಡಬಿದ್ರೆ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಉಡುಪಿ ಜಿಲ್ಲೆಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಕಾಪು, ಕುಂದಾಪುರ ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಒಕ್ಕೂಟವನ್ನು ರಚಿಸಲಾಗಿದ್ದು, ಮುಖ್ಯಮಂತ್ರಿಯವರ ಮತ್ತು ನಗರಾಭಿವೃದ್ಧಿ ಸಚಿವರ ಬಳಿ ನಿಯೋಗವನ್ನು ತೆಗೆದುಕೊಂಡು ಹೋಗಿ ಮನವಿ ಮಾಡಲಿದ್ದೇವೆ ಅಲ್ಲದೆ ಅಧಿಕಾರಿ ಗಳೊಂದಿಗೆ ಸಮಾಲೋಚನೆ ಮಾಡಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ವಿನಂತಿಸಿಕೊಳ್ಳುವು ದೆಂದು ತೀರ್ಮಾನಿಸಿರುತ್ತೇವೆ ಎಂದು ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಜಿಲ್ಲೆಗಳಿಗೆ ಏಕರೂಪದ ಪ್ರತ್ಯೇಕ ವಲಯ ನಿಯಮಾವಳಿ (ಕೋಸ್ಟಲ್ ರೋನ್ ರೆಗ್ಯುಲೇಶನ್ಸ್) ರಚಿಸುವ ಬಗ್ಗೆ ಮತ್ತು ಇತ್ತೀಚೆಗೆ ಗ್ರಾಮಪಂಚಾಯತ್ ವ್ಯಾಪ್ತಿಗಳಲ್ಲಿ ಜ್ಯಾರಿಗೊಳಿಸಲಾದ ಸರಕಾರದ ಆದೇಶ ಸಂಖ್ಯೆ (UDD16TTP2023 ಸರಳೀಕ ರಣಗೊಳಿಸುವ) ಬಗ್ಗೆ ಕೋರಿದೆ- ಸದಾಶಿವ ಉಳ್ಳಾಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನೀರಜ್ ಪಾಲ್, ಸಬಿತ ಮಿಸ್ಕಿತ್, ಅಬ್ದುಲ್ ಜಲೀಲ್, ಸುಳ್ಯ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
