ನನ್ನ ಊರು ಹುಬ್ಬಳ್ಳಿಯಲ್ಲಿದ್ದಷ್ಟೇ ಸ್ನೇಹಿತರು ನನಗೆ ಮಂಗಳೂರಿನಲ್ಲೂ ಇದ್ದಾರೆ.ಪ್ರಕಾಶ್ ಕುಂಪಲ ಅವರು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರೂ ತನ್ನ ಊರಿನ ಅಶಕ್ತರು,ಶಿಕ್ಷಣ ವಂಚಿತರು,ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ,ಇಲ್ಲಿನ ಮಣ್ಣಿನ ಸಂಸ್ಕೃತಿಯ ಹುಲಿವೇಷ ಕುಣಿತಕ್ಕೂ ದೊಡ್ಡ ಕೊಡುಗೆಯನ್ನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಪ್ರೇಕ್ಷಕರ ಅಪೇಕ್ಷೇಯ ಮೇರೆಗೆ ನಟ ಶರಣ್ ಅವರು ಕಾಲಿಗೆ ಧರಿಸಿದ್ದ ಶೂಗಳನ್ನ ಕಳಚಿ ಕಾಂತಾರ ಚಿತ್ರದ ವರಾಹರೂಪಂ ಹಾಡನ್ನ ವೇದಿಕೆಯಲ್ಲಿ ಸುಮಧುರವಾಗಿ ಹಾಡಿ ನೆರೆದವರನ್ನ ರಂಜಿಸಿದರು.