ಎಸ್.ಡಿ.ಆರ್.ಎಫ್ ನಿಂದ ಶೋಧ
ಸುಳ್ಯ: ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಮೃತ ದೇಹಕ್ಕಾಗಿ ಎಸ್ ಡಿ..ಆರ್.ಎಫ್ ನಿಂದ ನದಿಯಲ್ಲಿ ಶೋಧ ಕಾರ್ಯ ಆರಂಭಗೊಂಡಿದೆ.
ಜು.22 ರಂದು ಕರ್ತವ್ಯಕ್ಕೆಂದು ಮನೆಯಿಂದ ಬೆಳಗ್ಗೆ 09.00 ಗಂಟೆಗೆ ಹೋಗಿದ್ದು, ಬಳಿಕ ಕಾಣೆಯಾಗಿದ್ದಾರೆ. ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿ ಕಡೆ ಹೋಗಿರುವುದು ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ.
ನದಿಗೆ ಹಾರಿರುವುದು ಬಹುತೇಕ ಖಚಿತವಾಗಿದೆ ಹೀಗಾಗಿ ಈಜು ಪಟು ಈಶ್ವರ ಮಲ್ಪೆ ಕೂಡ ಸುಬ್ರಹ್ಮಣ್ಯ ಶೋಧಕ್ಕಾಗಿ ಬರಲಿದ್ದಾರೆ ಎಂದು ತಿಳಿದು ಬಂದಿದೆ.
